ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ಯಾರೂ ಮಾಡುವುದಿಲ್ಲ. ನನ್ನ ಮಗ ಮಾಡಲಿ, ಅಣ್ಣ, ತಮ್ಮ ಯಾರೇ ಮಾಡಲಿ, ತಪ್ಪು ತಪ್ಪೆ. ತಪ್ಪು ನಡೆದಿಲ್ಲ ಎಂದು ವಾದಿಸುವುದಿಲ್ಲ ಎಂದರು.
ʼಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗುತ್ತದೆಯೆʼ ಎಂಬ ಪ್ರಶ್ನೆಗೆ ʼಪಕ್ಷದ ವರಿಷ್ಠರು ಕುಳಿತು ಚರ್ಚಿಸಿ ಈ ಕುರಿತು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಖಂಡಿತವಾಗಿಯೂ ಸೂಕ್ತ ಕ್ರಮ ಆಗುತ್ತದೆʼ ಎಂದರು.